ಮತ್ತೊಂದು ಭಯಾನಕ ರಾ...೩
Posted date: 26 Wed, Sep 2012 ? 09:24:10 AM
ಮಾಜಿ ಮುಖ್ಯಮಂತ್ರಿ ಎಸ್.ಆರ್. ಕಂಠಿ ಯವರ ಮೊಮ್ಮಗ ಮಲ್ಲಿಕಾರ್ಜುನ ಕಂಠಿ ಹಾಗೂ ತಿಮ್ಮರಾಜು ಸೇರಿ ನಿರ್ಮಿಸುತ್ತಿರುವ ರಾ...೩ ಎಂಬ ಚಿತ್ರವನ್ನು ಮುಂದಿನ ತಿಂಗಳು ೧೮ ರಂದು ಹುಬ್ಬಳ್ಳಿಯಲ್ಲಿ ಪ್ರಾರಂಭವಾಗಲಿದೆ.  ಕಾರವಾರ, ದಾಂಢೇಲಿ, ಕೋಸ್ಟಾಲ್ ರಾಕ್ ಹಾಗೂ ಗೋವಾ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣಗೊಳ್ಳಲಿದೆ.  ಸಂಪೂರ್ಣ ಭಯನಾಕ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಶ್ರೀಶಾ ಜಾವೋರ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.  

    ಚಿತ್ರಕ್ಕೆ ಶ್ರೀಧರ್ ಸಂಗೀತ, ಹಾಲೇಶ್ ಛಾಯಾಗ್ರಹಣ, ಪರಶುರಾಮ್ ಮಲ್ಯಳ ಕಥೆ, ವಿ.ಮನೋಹರ್ ತಿಪ್ಪೇಶ್ ಸಾಹಿತ್ಯ, ಡಿಫರೆಂಟ್ ಜಾನಿ ಸಾಹಸ, ಜಗನ್, ಅಕುಲ್, ಮನು ನೃತ್ಯ ನಿರ್ದೇಶನ ಶ್ರೀಹರಿವರಾಸನಂ ಸಹಕಾರ ನಿರ್ದೇಶನ, ಶಿವು ಸಂಕಲನವಿರುವ ಈ ಚಿತ್ರದಲ್ಲಿ ಸಿದ್ಧಾರ್ಥ, ಡೇವಿಡ್, ಶೃತಿ,  ರಾಜುತಾಳಿಕೋಟೆ, ಮಲ್ಲಿಕಾರ್ಜುನ್ ಕಂಠಿ, ಸುಮ ವಿನಯಪ್ರಸಾದ್, ಅಚ್ಯುತ್ ರಾವ್, ಬೀರಾದಾರ್ ಶೋಭ ಶಿವಲಿಂಗಯ್ಯ ತಾರಾಗಣವಿದೆ.  

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed